
S1 : EP -1 : ದೇವರನ್ನು ಸುಪ್ರೀತಗೊಳಿಸುವುದು ಹೇಗೆ?: Janapada Story
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ದಾನದಿಂದ ದೇವರು ಸುಪ್ರೀತನಾಗುತ್ತಾನೆ ಎಂಬ ಮಾತಿಗೆ ಉದಾಹರಣೆಯಂತಿದೆ ಈ ಕಥೆ. ಒಂದಾನೊಂದು ಊರಿನಲ್ಲಿ ಅಜ್ಜಿ ಮತ್ತು ಮೊಮ್ಮಗ ಜೀವನೋಪಾಯಕ್ಕಾಗಿ ಒಬ್ಬ ಜಿಪುಣ ಸಾವುಕಾರ ನ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಹೀಗಿರುವ ಸಾವುಕಾರ ನ ಮನೆಗೆ ದೇವರು ಮನುಷ್ಯ ರೂಪದಲ್ಲಿ ಬಂದು ಊಟ ಕೇಳಿದ. ಆದರೆ ಸಾವುಕಾರ ಜಿಪುಣತನ ತೋರಿಸಿದ. ಆಗ ದೇವರು ಅಜ್ಜಿ ಮೊಮ್ಮಗನ ಮನೆಗೆ ಹೋದಾಗ ಒಂದು ಘಟನೆ ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com